
ಸಕಲೇಶಪುರ : ತಾಲೂಕಿನ ಒಸೂರು ಎಸ್ಟೇಟ್ ಹತ್ತಿರವಿರುವ ಹಲಸುಲಿಗೆ ಕಾಫಿ ಬೋರ್ಡ್ ಕಲ್ಪಿಸುವ ರಸ್ತೆ ಮಧ್ಯೆ ಇರುವ ರೈಲ್ವೆ ಗೇಟ್ಗಳನ್ನು ತಡರಾತ್ರಿ ಒಂಟಿ ಕಾಡಾನೆ ಮುರಿದ ಸ್ಥಳಕ್ಕೆ ಇಂದು ವಲಯ ಅರಣ್ಯ ಅಧಿಕಾರಿ ಹೇಮಂತ್ ಕುಮಾರ್ ಹಾಗೂ ಸಿಬ್ಬಂದಿಯವರು ಭೇಟಿ ನೀಡಿ, ರೈಲ್ವೆ ಗೇಟ್ಗಳನ್ನು ತುರ್ತಾಗಿ ಸರಿಪಡಿಸಿದ್ದು ರೈಲ್ವೆ ಇಲಾಖೆಯವರಿಗೆ ಗೇಟ್ ಗಳಿಗೆ ಲೈಟ್ ಗಳನ್ನು ಅಳವಡಿಸುವಂತೆ ಸೂಚಿಸಿದ್ದಾರೆ.ಹಾಗೂ ಈ ಭಾಗದಲ್ಲಿ ತಿರುಗಾಡುವ ಗ್ರಾಮಸ್ಥರು ಎಚ್ಚರಿಕೆಯಿಂದ ಸಂಚರಿಸಿ ಎಂದು ಸಲಹೆ ನೀಡಿದ್ದಾರೆ.
