
ಸಕಲೇಶಪುರ : ಶಾಂತಿ ಗ್ರಾಮದಲ್ಲಿ ಬುಧವಾರ ನಡೆದ ದೇವಾಂಗ ಸಮುದಾಯ ಭವನದ ಉದ್ಘಾಟನೆಯ ಸಂದರ್ಭದಲ್ಲಿ ಸಕಲೇಶಪುರ ದೇವಾಂಗ ಸಂಘದ ವತಿಯಿಂದ ದೇವಾಂಗ ಸಮಾಜದ ರಾಜ್ಯ ಸಭಾ ಸದಸ್ಯರಾದ ಕೆ.ನಾರಾಯಣ್ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ದೇವಾಂಗ ಸಂಘದ ನಿರ್ದೇಶಕರಾದ ಎಸ್.ಪಿ. ಸುರೇಶ್, ತಾಲೂಕು ಪ್ರಭಾರಿ ಅಧ್ಯಕ್ಷರಾದ ಎಸ್. ಎ. ಮೋಹನ್, ಕಾರ್ಯದರ್ಶಿ ಕೃಷ್ಣಮೂರ್ತಿ, ಖಜಾಂಚಿ ರುದ್ರೇಶ್, ವೆಂಕಟೇಶ್, ದೇವರಾಜು,ರವಿ, ದುರ್ಗೇಶ್, ಟಿ ಕುಮಾರ್ ಉಪಸ್ಥಿತರಿದ್ದರು
