ಮಠಸಾಗರದಿಂದ ಕೃಷ್ಣಾಪುರಕ್ಕೆ  ಕಲ್ಪಿಸುವ ಸೇತುವೆ ಕುಸಿಯುವ ಹಂತದಲ್ಲಿ  ಗ್ರಾಮಸ್ಥರ ಆಕ್ರೋಶ. ಸ್ಥಳಕ್ಕೆ ಮಾಜಿ ಸಚಿವರಾದ ಎಚ್.ಕೆ.ಕುಮಾರಸ್ವಾಮಿ ಭೇಟಿ 

ಸಕಲೇಶಪುರ : ತಾಲೂಕಿನ ಮಳಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಮಠ ಸಾಗರದಿಂದ ಕೃಷ್ಣಪುರಕ್ಕೆ ಕಲ್ಪಿಸುವ ಸೇತುವೆ ಸಂಪೂರ್ಣ ಶೀಥಿಲಗೊಂಡಿದ್ದು.
ಗ್ರಾಮಸ್ಥರು ದಿನನಿತ್ಯ ಸಂಚರಿಸುವ ಸೇತುವೆ ಕುಸಿದರೆ ಸಂಚರಿಸುವುದು ಹೇಗೆ ಎಂಬ ಪ್ರಶ್ನೆ ಗ್ರಾಮಸ್ಥರಲ್ಲಿ ಕಾಡುತ್ತಿದೆ.

ವ್ಯಾಪಾರ ವಹಿವಾಟು ಮಾಡುವ ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು ಹಾಗೂ ವಾಹನ ಸವಾರರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ಏಕೈಕ ರಸ್ತೆಯಾಗಿದ್ದು  ಈ ರಸ್ತೆ ಶೀಥಿಲಗೊಂಡು ಯಾವ ಕ್ಷಣದಲ್ಲಾದರೂ ಕುಸಿಯುವ ಹಂತದಲ್ಲಿ ಕಾಣುತ್ತಿದೆ.
ಈ ಭಾಗದಲ್ಲಿ ಸುಮಾರು 60 ಕುಟುಂಬಗಳಿದ್ದು 350ರಿಂದ 400 ಜನಸಂಖ್ಯೆ ಇರುವ ಸ್ಥಳವೇ ಹೀಗಾದರೆ ಸಮಸ್ಯೆಯನ್ನು ಬಗೆಹರಿಸುವ ಅಧಿಕಾರಿಗಳು,  ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಗ್ರಾಮಸ್ಥರಲ್ಲಿ ಉದ್ಭವ ಗೊಂಡಿದೆ.

ಈ ಸಮಸ್ಯೆಯನ್ನು ತಿಳಿದ ತಕ್ಷಣವೇ ಗ್ರಾಮಸ್ಥರನ್ನು ಭೇಟಿ ಮಾಡಿ ಇಂದು ಮಾಜಿ ಸಚಿವರಾದ ಎಚ್. ಕೆ. ಕುಮಾರಸ್ವಾಮಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು ಇದರ ಬಗ್ಗೆ   ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಳಲಿ   ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸತೀಶ್ ಶೆಟ್ಟಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!